ಅಳೆಯಲಾಗದ ಅಳತೆಯ ಉದ್ದಗಲದ ರಸ್ತೆಗಳು,
ಮುಗಿಲ ಚುಂಬನಕೆ ಕಾದಿರುವ ಕಟ್ಟಡಗಳು,
ಕಣ್ಮುಚ್ಚಿದರೂ ಮತ್ತೆಕಣ್ಬಿಟ್ಟು ನೋಡಬೇಕೆನಿಸುವ ದೀಪಗಳು,
ಮಾನವನೇ ಪ್ರಾಣವಿರದೇ ನಿಂತಂತ ಪ್ರತಿಮೆಗಳು,
ಈ ಅಧ್ಬುತಗಳನ್ನೆಲ್ಲ ತಿರು-ತಿರುಗಿ ನೋಡುತ್ತ,,
ಆ ನೆಲದ ಅನುಭಂದ ಅಲ್ಲೆ ಮರೆಯುತ್ತ..
ಎಲ್ಲ ಬರುತ್ತಿದಾರೀಗ....ಮತ್ತಿಲ್ಲಿಗೆ,
ಮರಳಿ ಈ ತವರ ಮಣ್ಣಿಗೆ..
ಅಲ್ಲೀಗ ರಸ್ತೆಗಳು ಮುದುರಿ ಮಲಗಲಾರಂಭಸಿವೆ,
ಕಟ್ಟಡಗಳು ಬೆಳೆದಂತೆ ನಸುನಾಚಿ ತಲೆಯ ತಗ್ಗಿಸಿವೆ,
ದೀಪಗಳ ಬೆಳಕು ಖುಶಿಗೊಳಿಸದಷ್ಟು ಪ್ರಖರತೆಯ ನೀಡುತಿದೆ,
ಪ್ರತಿಮೆಗಳೇ ಎದ್ದು ಬಂದು ಕಾಡಿದಂತೆನಿಸಲರಂಭಿಸಿದೆ,
ಹಣದ ಎಲೆಯುದುರಿಸುವ ಮರಗಳಲ್ಲೀಗ,
ಎಣಿಕೆ ಸಿಗುವಷ್ಟು ಮಾತ್ರ ಎಲೆಗೆಳಿವೆ..
ಹೀಗಾಗಿ ಎಲ್ಲ ಮತ್ತೆ ಬರುತ್ತಿದ್ದಾರೆ,
ಮರಳಿ ತವರ ಮನೆ ಬಾಗಿಲಿಗೆ!!!
ಹಾಸಿಗೆಯಗಲದ ರಸ್ತೆಗಳಲ್ಲಿ,
ಭವಿಷ್ಯದ ದಾರಿ ಹುಡುಕುತ್ತ..
ಅಂಗೈಯ್ಯಗಲದ ಮನೆಗಳಲ್ಲಿ,
ನೆಮ್ಮದಿಯ ಕನಸು ಕಾಣುತ್ತ...
ಕರುಣಾಳು ಕಾಂತಿಯ ಆ ಬಡ ಬೆಳಕಿನಲ್ಲಿ,
ನಾಳಿನ ಬದುಕಿನ ಹೊಂಗನಸ ಅರಸುತ್ತ...
ಆಲದ ಮರದ ಗಾಳಿಯಲಿ ನಲಿವಾಗ,,
ಹವ ನಿಯಂತ್ರಿತ ಕೊಠಡಿಯ ನೆನಪ ಮರೆಯುತ್ತ..
ಕಪ್ಪು,ಕಂದು,ಜೇಡಿ ಕೆಮ್ಮಣ್ಣಿನಲ್ಲಿ,,
ಮುಂದೆ ಬದುಕು ನೆಡೆಸುವ ಚೇತನವ ಕಾಣುತ್ತ,,
ಮರಳಿ ಬಂದು ನಿಂತಿದ್ದಾರೀಗ,,
ಈ ಜನ್ಮಭೂಮಿ ಮಣ್ಣಿಗೇ...
"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ"
ಅಡಿಗರಾಡಿದ ಮಾತು ಸುಳ್ಳಲ್ಲವಲ್ಲ???
Sunday, November 23, 2008
Subscribe to:
Posts (Atom)